ಬೆಂಗಳೂರು: ಅಕ್ರಮ ಸಂಬಂಧ ಸಾಕು. ನನ್ನ ಪಾಡಿಗೆ ನನ್ನ ಬಿಟ್ಟುಬಿಡು ಎಂದಿದ್ದಕ್ಕೆ ವ್ಯಕ್ತಿಯೊಬ್ಬ ಮಹಿಳೆಗೆ ಚೂರಿ ಇರಿದು ಕೊಲೆ ಮಾಡಲು ಯತ್ನಿಸಿರುವ ಘಟನೆ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.‌


COMMERCIAL BREAK
SCROLL TO CONTINUE READING

ಈ ಆಂಟಿ‌ ಅಂಕಲ್‌ ಲವ್ ಸ್ಟೋರಿ ಕೇಳಿ ಪೊಲೀಸರೇ ತಬ್ಬಿಬ್ಬಾಗಿದ್ದು, ಗಂಗಮ್ಮ ಎಂಬಾಕೆಗೆ ಚೂರಿ ಇರಿದ ರಾಜು ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.


ಪ್ರಕರಣ ಹಿನ್ನೆಲೆ


ರಾಜು ಮತ್ತು ಗಂಗಮ್ಮಗೆ ಬೇರೆ ಬೇರೆ ಮದುವೆಯಾಗಿದ್ದರು ಸಹ 4 ವರ್ಷಗಳಿಂದ  ಅಕ್ರಮ ಸಂಬಂಧವಿತ್ತು.ಇತ್ತಿಚೆಗೆ ಗಂಗಮ್ಮ ನನಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಒಬ್ಬಳಿಗೆ ಮದುವೆಯಾಗಿದೆ. ಮತ್ತೊಬ್ಬಳಿಗೆ ಮದುವೆ ಮಾಡಬೇಕು. ಹೀಗಾಗಿ ಈ ಅಕ್ರಮ ಸಂಬಂಧ ಬೇಡ ನನ್ನ ಪಾಡಿಗೆ ನನ್ನ ಬಿಟ್ಟುಬಿಡು ಎಂದಿದ್ದಳು.


ಇದನ್ನೂ ಓದಿ: Bengaluru Mysuru Toll: ಟೋಲ್ ಸಂಗ್ರಹ ಹಿನ್ನೆಲೆ ಪ್ರಯಾಣಿಕರಿಗೆ ಶಾಕ್ ಕೊಟ್ಟ ಕೆಎಸ್ ಆರ್ ಟಿಸಿ ನಿಗಮ!


ಇದರಿಂದ ರೊಚ್ಚಿಗೆದ್ದಿದ್ದ ರಾಜು ನನ್ನನ್ನು ಬಿಟ್ಟರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಆದರೆ ಗಂಗಮ್ಮ ಇದನ್ನು ಕೇರ್ ಮಾಡದೇ ರಾಜು ಮೊಬೈಲ್ ನಂಬರ್ ಬ್ಲಾಕ್ ಮಾಡಿದ್ದಳು. ಇದರಿಂದ ಮತ್ತಷ್ಟು ರೊಚ್ಚಿಗೆದ್ದ ರಾಜು ಕಳೆದ 9 ತಾರೀಖು ಗಂಗಮ್ಮ ಕೆಲಸ ಮಾಡುತ್ತಿದ್ದ ಶಾಲೆ ಬಳಿ ತೆರಳಿ ಮಾತನಾಡಬೇಕು ಎಂದು‌ ಕರೆದಿದ್ದ. ಹೀಗೆಯೇ ಇಬ್ಬರು ಮಾತನಾಡಿಕೊಂಡು ಯಲಚೇನಹಳ್ಳಿ ಮೆಟ್ರೋ‌ ನಿಲ್ದಾಣದ ಬಳಿ ಬಂದಾಗ ಅಕ್ರಮ ಸಂಬಂಧದ ವಿಚಾರವಾಗಿ ಮಾತಿಗೆ ಮಾತು ಬೆಳೆದು‌ ಗಲಾಟೆ ಶುರುವಾಗಿದೆ.


ಇದನ್ನೂ ಓದಿ:Bengaluru Airhostess: ಡೇಟಿಂಗ್ ಆ್ಯಪಲ್ಲಿ ಲವ್: ಮದುವೆಯಾಗು ಎಂದಿದ್ದಕ್ಕೆ ಗಗನಸಖಿ‌ ಕೊಂದ ಟೆಕ್ಕಿ!


ಈ ವೇಳೆ ರಾಜು ಮೊದಲೇ ತಂದಿದ್ದ ಚಾಕುವಿನಿಂದ ಹೊಟ್ಟೆಗೆ ಇರಿಯಲು ಮುಂದಾಗಿದ್ದಾನೆ. ಈ ವೇಳೆ ಗಂಗಮ್ಮ ಸಹ ಆತನಿಗೆ‌ ಪ್ರತಿರೋಧ ಒಡ್ಡಿದ್ದರಿಂದ ಎಡ ಭುಜಕ್ಕೆ, ಕೆನ್ನೆಗೆ ಇರಿದು ಕೊಲೆ ಯತ್ನ ನಡೆಸಿದ್ದಾನೆ. ಸದ್ಯ ಸ್ಥಳೀಯ ಆಸ್ಪತ್ರೆಯಲ್ಲಿ ಗಂಗಮ್ಮಗೆ ಚಿಕಿತ್ಸೆ ನೀಡಲಾಗುತ್ತಿದ್ದು,ಕೃತ್ಯ ಸಂಬಂಧ ಕೋಣನಕುಂಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಅಂಕಲ್ ರಾಜುನನ್ನ ಬಂಧಿಸಿದ್ದಾರೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.